Skip to content

Jio Kannada News

Kannada News

banner-promo-full-green
Primary Menu
  • HOME
  • ಕ್ರಿಕೆಟ್
  • ರಾಜ್ಯ
  • ದೇಶ
  • ಆರೋಗ್ಯ
  • ಸಿನಿಮಾ
  • ಉದ್ಯೋಗ
  • ಕ್ರೈಮ್
  • ಆಟೋಮೊಬೈಲ್
  • ಟೆಕ್
  • Contact Us
Light/Dark Button
Wtach Live
  • Home
  • ಆರೋಗ್ಯ
  • ನೀವು ಮಕ್ಕಳಿಗೆ ಜೆಮ್ಸ್​ ನೀಡುತ್ತಿದ್ದೀರಾ? ಹಾಗಿದ್ರೆ ಈ ಬಗ್ಗೆ ಗೊತ್ತಿರಲಿ
  • ಆರೋಗ್ಯ

ನೀವು ಮಕ್ಕಳಿಗೆ ಜೆಮ್ಸ್​ ನೀಡುತ್ತಿದ್ದೀರಾ? ಹಾಗಿದ್ರೆ ಈ ಬಗ್ಗೆ ಗೊತ್ತಿರಲಿ

Jiokannadanews Posted on 5 months ago 1 minute read
Gems

ಮಕ್ಕಳ ಫೇವರೇಟ್ ಚೊಕೊಲೇಟ್​ಗಳಲ್ಲಿ ಜೆಮ್ಸ್ ಕೂಡ ಒಂದು. ಆಕರ್ಷಕ ಬಣ್ಣಗಳಿಂದ ಕೂಡಿರುವ ಈ ಚೊಕೊಲೇಟ್ ಕಳೆದ ದಶಕದಿಂದ ಭಾರತೀ ಮಾರುಕಟ್ಟೆಯಲ್ಲಿದೆ. ಭಾರತೀಯ ಮಕ್ಕಳ ನೆಚ್ಚಿನ ಚಾಕೊಲೇಟ್​ನಲ್ಲಿ ಗುರುತಿಸಿಕೊಂಡಿರುವ ಜೆಮ್ಸ್​ನ ಅತಿಯಾದ ಸೇವನೆಯು ಆರೋಗ್ಯದ ಮೇಲೆ ಕೆಲವು ಅಡ್ಡಪರಿಣಾಮಗಳನ್ನು ಬೀರಬಹುದು. ಏಕೆಂದರೆ ಇದರಲ್ಲಿ ಬಳಸಲಾಗುತ್ತಿರುವುದು ಕೃತಕ ಬಣ್ಣಗಳು.

ಈ ಬಣ್ಣಗಳ ಬಗ್ಗೆ ಜೆಮ್ಸ್​ ಪಾಕೆಟ್​ ಮೇಲೆಯೇ ಎಚ್ಚರಿಕೆ ನೀಡಲಾಗಿದೆ. ಆದರೆ ಇಲ್ಲಿ ಬಣ್ಣಗಳ ಕೋಡ್​ಗಳನ್ನು ಬಳಸಿರುವುದರಿಂದ ಅನೇಕರಿಗೆ ಇದರಿಂದಾಗುವ ದುಷ್ಪರಿಣಾಮಗಳ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ. ಹಾಗಿದ್ರೆ ಜೆಮ್ಸ್​ನಲ್ಲಿ ಬಳಸಲಾಗುವ ಬಣ್ಣಗಳಾವುವು ಅಂದರಿಂದಾಗುವ ಅಡ್ಡ ಪರಿಣಾಮಗಳೇನು ಎಂದು ತಿಳಿಯೋಣ…

  • ಟೈಟಾನಿಯಂ ಡೈಆಕ್ಸೈಡ್ (INS 171): ಇದನ್ನು ಬಿಳಿ ಬಣ್ಣಕ್ಕಾಗಿ ಬಳಸಲಾಗುತ್ತದೆ. ಸಿಂಥೆಟಿಕ್ ಬಣ್ಣವು DNA ಹಾನಿ ಮಾಡಬಹುದು ಎಂಬ ಕಾರಣಕ್ಕೆ ಆಸ್ಟ್ರಿಯಾ, ಫ್ರಾನ್ಸ್, ಜರ್ಮನಿ, ಇಟಲಿ, ಸ್ಪೇನ್ ಮತ್ತು ಪೋಲೆಂಡ್ ಸೇರಿದಂತೆ ಯುರೋಪಿಯನ್ ಒಕ್ಕೂಟ (EU) ದೇಶಗಳಲ್ಲಿ ಇದನ್ನು ನಿಷೇಧಿಸಲಾಗಿದೆ.
  • ಟಾರ್ಟ್ರಾಜಿನ್ (INS 102): ಇದು ಹಳದಿ ಬಣ್ಣವನ್ನು ನೀಡುತ್ತದೆ. ಮಕ್ಕಳಲ್ಲಿ ಇದು ಅತಿಸುಟುಕುತನ (Hyperactivity) ಮತ್ತು ಆಸ್ತಮಾ ಸಮಸ್ಯೆಯನ್ನು ಪ್ರಚೋದಿಸಬಹುದು. ಹೀಗಾಗಿಯೇ ಇದನ್ನು ಸಹ ಕೆಲ ದೇಶಗಳಲ್ಲಿ ಮಕ್ಕಳಿಗೆ ನೀಡುವುದನ್ನು ನಿಷೇಧಿಸಲಾಗಿದೆ..
  • ಸನ್‌ಸೆಟ್ ಯೆಲ್ಲೋ (INS 110): ಕಿತ್ತಳೆ-ಹಳದಿ ಬಣ್ಣದ ಈ ರಾಸಾಯನಿಕವು ಅಲರ್ಜಿ ಮತ್ತು ಮಕ್ಕಳ ವರ್ತನೆಯಲ್ಲಿ ಬದಲಾವಣೆ ತರಬಹುದು.
  • ಬ್ರಿಲಿಯಂಟ್ ಬ್ಲೂ (INS 133):  ಜೆಮ್ಸ್​ನಲ್ಲಿ ಬಳಸಲಾಗುವ ನೀಲಿ ಬಣ್ಣವು ಮಕ್ಕಳಲ್ಲಿ ಅಲರ್ಜಿ ಉಂಟುಮಾಡಬಹುದು.
  • ಪೊನ್ಸಿಯು 4R (INS 124) ಮತ್ತು ಕಾರ್ಮೋಸಿನ್ (INS 122): ಜೆಮ್ಸ್​ನಲ್ಲಿರುವ ಕೆಂಪು ಬಣ್ಣವು ಮಕ್ಕಳ ಏಕಾಗ್ರತೆಯ ಮೇಲೆ ಪರಿಣಾಮ ಬೀರಬಹುದು.

ಆರೋಗ್ಯ ಸಮಸ್ಯೆಗಳು

ಕೇವಲ ಬಣ್ಣಗಳಷ್ಟೇ ಅಲ್ಲದೆ, ಜೆಮ್ಸ್‌ನಲ್ಲಿರುವ ಇತರ ಅಂಶಗಳೂ ಆರೋಗ್ಯಕ್ಕೆ ಹಾನಿಕಾರಕವಾಗಬಹುದು. ಹೀಗೆ ಮಕ್ಕಳ ಮೇಲೆ ದುಷ್ಪರಿಣಾಮ ಬೀರುವ ಅಂಶಗಳಾವುವು ಎಂದು ನೋಡುವುದಾದರೆ…

  • ಹೆಚ್ಚಿನ ಸಕ್ಕರೆ ಅಂಶ: ಜೆಮ್ಸ್‌ ಚೊಕೊಲೇಟ್​ನ ತೂಕದ ಸುಮಾರು 60% ರಿಂದ 70% ಭಾಗ ಸಕ್ಕರೆಯೇ ಆಗಿರುತ್ತದೆ. ಇದು ಮಕ್ಕಳಲ್ಲಿ ಹಲ್ಲು ಹುಟ್ಟುವುದು (Tooth Decay), ಬೊಜ್ಜು ಮತ್ತು ಮಧುಮೇಹದ ಅಪಾಯವನ್ನು ಹೆಚ್ಚಿಸುತ್ತದೆ.
  • ಹೈಡ್ರೋಜನೇಟೆಡ್ ಕೊಬ್ಬು: ಇವುಗಳಲ್ಲಿರುವ ಟ್ರಾನ್ಸ್-ಫ್ಯಾಟ್ ಹೃದಯದ ಆರೋಗ್ಯಕ್ಕೆ ಒಳ್ಳೆಯದಲ್ಲ.

ಕರ್ನಾಟಕ ಸರ್ಕಾರದ ಎಚ್ಚರಿಕೆ

ಇತ್ತೀಚೆಗೆ ಕರ್ನಾಟಕ ಆಹಾರ ಇಲಾಖೆಯು ಕಾಟನ್ ಕ್ಯಾಂಡಿ ಮತ್ತು ಗೋಬಿ ಮಂಚೂರಿಯನ್‌ನಂತಹ ಆಹಾರಗಳಲ್ಲಿ ಬಳಸುವ ಅಪಾಯಕಾರಿ ಕೃತಕ ಬಣ್ಣಗಳ ಮೇಲೆ ನಿರ್ಬಂಧ ಹೇರಿತ್ತು. ಇಂತಹ ಬಣ್ಣಗಳು ಕ್ಯಾನ್ಸರ್ ಕಾರಕವಾಗುವ ಸಾಧ್ಯತೆಯೂ ಇರುತ್ತದೆ. ಇದಾಗ್ಯೂ ರಾಜ್ಯ ಸರ್ಕಾರ ಜೆಮ್ಸ್​ನಲ್ಲಿರುವ ಬಣ್ಣಗಳಿಗೆ ಯಾವುದೇ ನಿರ್ಬಂಧ ಹೇರಿಲ್ಲ ಎಂಬುದು ಇಲ್ಲಿ ಉಲ್ಲೇಖಾರ್ಹ.

ಇದನ್ನೂ ಓದಿ: 2028ರ ಚುನಾವಣೆಗೆ ನಿಖಿಲ್ ಕುಮಾರಸ್ವಾಮಿಗೆ ಕ್ಷೇತ್ರ ಫಿಕ್ಸ್​..!

ಇಲ್ಲಿ ನಿರ್ಬಂಧ ಹೇರದಿರಲು ಮುಖ್ಯ ಕಾರಣ ಭಾರತದಲ್ಲಿ ಜೇಮ್ಸ್​ನಲ್ಲಿ ಬಳಸಲಾಗುವ ಬಣ್ಣಗಳನ್ನು ನಿಯಮಿತ ಪ್ರಮಾಣದಲ್ಲಿ ಬಳಸಲು FSSAI ಅನುಮತಿ ನೀಡಿರುವುದು. ಈ ಅನುಮತಿಯ ಹೊರತಾಗಿಯೂ ದೈನಂದಿನ ಅಥವಾ ಅತಿಯಾದ ಸೇವನೆಯು ಆರೋಗ್ಯಕ್ಕೆ ಸೂಕ್ತವಲ್ಲ. ಮಕ್ಕಳಿಗೆ ಇವುಗಳ ಬದಲಿಗೆ ನೈಸರ್ಗಿಕ ಬಣ್ಣವಿರುವ ಹಣ್ಣುಗಳನ್ನು ನೀಡುವುದು ಉತ್ತಮ.

 

About the Author

Jiokannadanews

Administrator

jiokannadanews.com

Visit Website View All Posts
Tags: Health Tips

Post navigation

Previous: ಅಲ್ಲಾನ ಕಂಪನಿಯಿಂದ ಬಿಜೆಪಿಗೆ 30 ಕೋಟಿ ರೂ. ದೇಣಿಗೆ!
Next: ಭಾರತದಲ್ಲಿ ಅತೀ ಹೆಚ್ಚು ಮೈಲೇಜ್ ನೀಡುವ ಸ್ಕೂಟರ್ ಯಾವುದು ಗೊತ್ತಾ?

Related Stories

4 Covid Deaths in AP: Karnataka Tightens Border Vigil
  • ಆರೋಗ್ಯ
  • ರಾಜ್ಯ

ಕೊರೊನಾಗೆ ನಾಲ್ವರು ಬಲಿ:  ಕರ್ನಾಟಕದ ಗಡಿ ಭಾಗಗಳಲ್ಲಿ ಕಟ್ಟೆಚ್ಚರ

Jiokannadanews Posted on 1 week ago
Shigella Bacteria Scare
  • ಆರೋಗ್ಯ
  • ರಾಜ್ಯ

4 ವರ್ಷದ ಬಾಲಕಿ ಬಲಿ: ‘ಶಿಗೆಲ್ಲ’ ಬಗ್ಗೆ ಎಚ್ಚರ..!

Jiokannadanews Posted on 2 months ago
Good News from the Govt: Root Canal Treatment is Now Completely Free!
  • ಆರೋಗ್ಯ

ರಾಜ್ಯ ಸರ್ಕಾರದಿಂದ ಗುಡ್​​ ನ್ಯೂಸ್: ರೂಟ್ ಕೆನಾಲ್ ಸಂಪೂರ್ಣ ಉಚಿತ!

Jiokannadanews Posted on 3 months ago

Trending News

ಕಾಕ್ರೋಚ್​ಗಳಿಗೆ ಗೆಲುವು: ಧರ್ಮೇಂದ್ರ ಪ್ರಧಾನ್ ರಾಜೀನಾಮೆ! Dharmendra Pradhan Resigns Over NEET-UG 2026 Paper Leak Row 1
  • ದೇಶ

ಕಾಕ್ರೋಚ್​ಗಳಿಗೆ ಗೆಲುವು: ಧರ್ಮೇಂದ್ರ ಪ್ರಧಾನ್ ರಾಜೀನಾಮೆ!

Posted on 2 days ago
ಕೇಂದ್ರ ಸರ್ಕಾರದ ಮುಂದೆ 3 ಬೇಡಿಕೆಯಿಟ್ಟ CJP Picsart_26-07-24_17-52-02-956 2
  • ದೇಶ

ಕೇಂದ್ರ ಸರ್ಕಾರದ ಮುಂದೆ 3 ಬೇಡಿಕೆಯಿಟ್ಟ CJP

Posted on 3 days ago
ಧರ್ಮೇಂದ್ರ ಪ್ರಧಾನ್ ಯಾಕೆ ರಾಜೀನಾಮೆ ನೀಡುತ್ತಿಲ್ಲ ಗೊತ್ತಾ? Why Dharmendra Pradhan Won't Resign? 3
  • ದೇಶ

ಧರ್ಮೇಂದ್ರ ಪ್ರಧಾನ್ ಯಾಕೆ ರಾಜೀನಾಮೆ ನೀಡುತ್ತಿಲ್ಲ ಗೊತ್ತಾ?

Posted on 3 days ago
ಸೋನಮ್ ವಾಂಗ್ಚುಕ್ ಉಪವಾಸ ಅಂತ್ಯ: ಮುಂದಿನ ಹಾದಿಯೇನು? Sonam Wangchuk Ends 26-Day Fast After Govt Assurances 4
  • ದೇಶ

ಸೋನಮ್ ವಾಂಗ್ಚುಕ್ ಉಪವಾಸ ಅಂತ್ಯ: ಮುಂದಿನ ಹಾದಿಯೇನು?

Posted on 3 days ago
ಬೇರೆಯವರಿಗೆ ನ್ಯಾಯ, RCB ಆಟಗಾರರಿಗೆ ಅನ್ಯಾಯ..! Sadagoppan Ramesh Slams Selectors for Dropping RCB Players 5
  • ಕ್ರಿಕೆಟ್

ಬೇರೆಯವರಿಗೆ ನ್ಯಾಯ, RCB ಆಟಗಾರರಿಗೆ ಅನ್ಯಾಯ..!

Posted on 4 days ago

You may have missed

Dharmendra Pradhan Resigns Over NEET-UG 2026 Paper Leak Row
  • ದೇಶ

ಕಾಕ್ರೋಚ್​ಗಳಿಗೆ ಗೆಲುವು: ಧರ್ಮೇಂದ್ರ ಪ್ರಧಾನ್ ರಾಜೀನಾಮೆ!

Jiokannadanews Posted on 2 days ago
Picsart_26-07-24_17-52-02-956
  • ದೇಶ

ಕೇಂದ್ರ ಸರ್ಕಾರದ ಮುಂದೆ 3 ಬೇಡಿಕೆಯಿಟ್ಟ CJP

Jiokannadanews Posted on 3 days ago
Why Dharmendra Pradhan Won't Resign?
  • ದೇಶ

ಧರ್ಮೇಂದ್ರ ಪ್ರಧಾನ್ ಯಾಕೆ ರಾಜೀನಾಮೆ ನೀಡುತ್ತಿಲ್ಲ ಗೊತ್ತಾ?

Jiokannadanews Posted on 3 days ago
Sonam Wangchuk Ends 26-Day Fast After Govt Assurances
  • ದೇಶ

ಸೋನಮ್ ವಾಂಗ್ಚುಕ್ ಉಪವಾಸ ಅಂತ್ಯ: ಮುಂದಿನ ಹಾದಿಯೇನು?

Jiokannadanews Posted on 3 days ago

Categories

  • Uncategorized
  • ಆಟೋಮೊಬೈಲ್
  • ಆರೋಗ್ಯ
  • ಉದ್ಯೋಗ
  • ಕ್ರಿಕೆಟ್
  • ಕ್ರೈಮ್
  • ಟೆಕ್
  • ದೇಶ
  • ರಾಜ್ಯ
  • ಸಿನಿಮಾ
  • Contact Us
  • About Us
  • Disclaimer
  • Terms and Conditions
  • Privacy Policy
Copyright © All rights reserved. | MoreNews by AF themes.