Skip to content

Jio Kannada News

Kannada News

banner-promo-full-green
Primary Menu
  • HOME
  • ಕ್ರಿಕೆಟ್
  • ರಾಜ್ಯ
  • ದೇಶ
  • ಆರೋಗ್ಯ
  • ಸಿನಿಮಾ
  • ಉದ್ಯೋಗ
  • ಕ್ರೈಮ್
  • ಆಟೋಮೊಬೈಲ್
  • ಟೆಕ್
  • Contact Us
Light/Dark Button
Wtach Live
  • Home
  • ರಾಜ್ಯ
  • ಬೆಂಗಳೂರಿಗೆ ಬರುತ್ತಿದೆ ‘ಬ್ಯಾಂಕಾಕ್ ಕ್ಯಾಂಡಿ ಡ್ರಗ್ಸ್​’
  • ಕ್ರೈಮ್
  • ರಾಜ್ಯ

ಬೆಂಗಳೂರಿಗೆ ಬರುತ್ತಿದೆ ‘ಬ್ಯಾಂಕಾಕ್ ಕ್ಯಾಂಡಿ ಡ್ರಗ್ಸ್​’

Jiokannadanews Posted on 4 months ago 1 minute read
Candy

ಬೆಂಗಳೂರು ಸಿಟಿ ‘ಡ್ರಗ್ಸ್ ಡ್ರಾಪ್’ ನಗರವಾಗುತ್ತಿದೆಯಾ? ಇಂತಹದೊಂದು ಪ್ರಶ್ನೆ ಮೂಡಲು ಮುಖ್ಯ ಕಾರಣ ಎಲ್ಲಾ ಮಾದರಿಯ ಡ್ರಗ್ಸ್​​ಗಳು ನೇರವಾಗಿ ಬೆಂಗಳೂರಿಗೆ ಬರುತ್ತಿರುವುದು. ಅಂದರೆ ಒಂದೇ ದಿನ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಎರಡು ಪ್ರಕರಣ ದಾಖಲಾಗಿದೆ. ಈ ಪ್ರಕರಣಗಳ ಜಾಲ ನಿಂತಿರುವುದು ದೂರದ ಬ್ಯಾಂಕಾಕ್​​ನಲ್ಲಿ.

ಮೊದಲ ಪ್ರಕರಣದಲ್ಲಿ ಬ್ಯಾಂಕಾಕ್​​ನಿಮದ ಬಂದಿದ್ದ ಪ್ರಯಾಣಿಕರೊಬ್ಬರ ಲಗೇಜ್​​ನಲ್ಲಿ ಹೈಡ್ರೋಫೋನಿಕ್ ಗಾಂಜಾ ಪತ್ತೆಯಾಗಿತ್ತು. ಸಂಶಯಾಸ್ಪದ ರೀತಿಯಲ್ಲಿ ಬಂದಿದ್ಧ ಪ್ರಯಾಣಿಕನನ್ನು ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆದು ಪರಿಶೀಲಿಸಿದಾಗ 9.7 ಕೆ.ಜಿ ಹೈಡ್ರೋಫೋನಿಕ್ ಗಾಂಜಾ ಇರುವುದು ಕಂಡು ಬಂದಿದೆ. ಅದು ಸಹ ಬರೋಬ್ಬರಿ 3 ಕೋಟಿ ರೂ. ಮೌಲ್ಯದ ಗಾಂಜಾ.

ಈ ಪ್ರಕರಣದ ಬೆನ್ನಲ್ಲೇ ಬ್ಯಾಂಕಾಕ್​​ನಿಂದ ಬಂದಿದ್ದ ಮತ್ತೋರ್ವ ವ್ಯಕ್ತಿ ಕೂಡ ಕಸ್ಟಮ್ಸ್ ಅಧಿಕಾರಿಗಳಿಗೆ ಸಿಕ್ಕಿಬಿದ್ದಿದ್ದಾನೆ. ಈತನ ಬಳಿ ಇದದ್ದು ಮಾದಕ ವಸ್ತುಗಳು. ಆದರೆ ಈ ಡ್ರಗ್ಸ್​ ಅನ್ನು ಸಾಗಿಸುತ್ತಿದ್ದ ರೀತಿ ನೋಡಿ ಕಸ್ಟಮ್ಸ್ ಅಧಿಕಾರಿಗಳೇ ಅಚ್ಚರಿಗೊಂಡಿದ್ದಾರೆ.

ಬಾಂಕಾಕ್​​ನಲ್ಲಿ ಕ್ಯಾಂಡಿ ಪ್ಯಾಕೆಟ್​​ನಲ್ಲಿ ಮಾದಕ ವಸ್ತುಗಳನ್ನು ಪ್ಯಾಕ್ ಮಾಡಿ ಈತ ಬೆಂಗಳೂರಿಗೆ ಪ್ರಯಾಣ ಬೆಳೆಸಿದ್ದ. ಇತ್ತ ಗಾಂಜಾ ಪತ್ತೆಯಾದ ಬೆನ್ನಲ್ಲೇ ಹೈ ಅಲರ್ಟ್​ ಆಗಿದ್ದ ಕಸ್ಟಮ್ಸ್ ಅಧಿಕಾರಿಗಳಿಗೆ ಸಂಶಯಾಸ್ಪದ ಮತ್ತೊರ್ವ ವ್ಯಕ್ತಿ ಕಣ್ಣಿಗೆ ಬಿದ್ದಿದ್ದಾನೆ.

ಆತನನ್ನು ವಶಕ್ಕೆ ಪಡೆದು ಪರಿಶೀಲಿಸಿದಾಗ ಬ್ಯಾಗ್​​ನಲ್ಲಿ ಕ್ಯಾಂಡಿ ಪಾಕೆಟ್​​ಗಳು ಇರುವುದು ಕಂಡು ಬಂದಿದೆ. ಮೊದಲಿಗೆ ಮಿಠಾಯಿ ಅಂದುಕೊಂಡಿದ್ದ ಅಧಿಕಾರಿಗಳು ಒಂದು ಓಪನ್ ಮಾಡಿ ನೋಡಿದ್ದಾರೆ. ಆಗಲೇ ಗೊತ್ತಾಗಿದ್ದು ಡ್ರಗ್ಸ್​ ದಂಧೆಯ ಹೊಸ ಟ್ರಿಕ್.

ಬ್ಯಾಂಕಾಕ್​​ನಲ್ಲಿ ಸಾಮಾನ್ಯವಾಗಿ ಸಿಗುವ ಕ್ಯಾಂಡಿ ಮಿಠಾಯಿ ಪಾಕೆಟ್ ಅನ್ನು ಹೋಲುವಂತಹ ಪಾಕೆಟ್​ಗಳನ್ನು ರೂಪಿಸಿರುವ ಡ್ರಗ್ಸ್ ದಂಧೆಕೋರರು ಅದನ್ನು ಭಾರತಕ್ಕೆ ರವಾನಿಸುತ್ತಿದ್ದಾರೆ.

ಅದರಂತೆ ಫೆಬ್ರವರಿ 12 ರಂದು  1.7 ಕೆ.ಜಿ ಮಾದಕ ವಸ್ತುವನ್ನು ಕ್ಯಾಂಡಿ ಪಾಕೆಟ್​​ನಲ್ಲಿ ಬ್ಯಾಂಕಾಕ್​​ನಿಂದ ಬೆಂಗಳೂರಿಗೆ ತರಲಾಗಿದೆ. ಆದರೆ ಈ ಬಾರಿ ಪೆಡ್ಲರ್​​ನನ್ನು ವಶಕ್ಕೆ ಪಡಿಯುವಲ್ಲಿ ಕಸ್ಟಮ್ಸ್ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ.

ಇದನ್ನೂ ಓದಿ: 2028ರ ಚುನಾವಣೆಗೆ ನಿಖಿಲ್ ಕುಮಾರಸ್ವಾಮಿಗೆ ಕ್ಷೇತ್ರ ಫಿಕ್ಸ್​..!

ಇದೀಗ ಬ್ಯಾಂಕಾಕ್​ನಿಂದ ಹೈಡ್ರೋಫೋನಿಕ್ ಗಾಂಜಾ ಹಾಗೂ ಡ್ರಗ್ಸ್ ತಂದಿರುವ ಇಬ್ಬರನ್ನು ಕಸ್ಟಮ್ಸ್ ಆಫೀಸರ್​ಗಳು ವಶಕ್ಕೆ ಪಡೆದಿದ್ದು, ಎನ್‌ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಿ ವಿಚಾರಣೆ ಮುಂದುವರೆಸಲಾಗಿದೆ.

 

About the Author

Jiokannadanews

Administrator

jiokannadanews.com

Visit Website View All Posts
Tags: Crime News

Post navigation

Previous: ವಿದೇಶದಿಂದ ಚಿನ್ನ, ಐಫೋನ್ ತರುತ್ತೀರಾ? ಹೊಸ ನಿಯಮ ಜಾರಿ
Next: ‘ವಂದೇ ಮಾತರಂ’ ಹಾಡುವ ಮುನ್ನ ಇದೆಲ್ಲಾ ನಿಮಗೆ ಗೊತ್ತಿರಲಿ!

Related Stories

DK Shivakumar Takes Charge: 13 MLAs to Swear In as Ministers
  • ರಾಜ್ಯ

ಸಿಎಂ ಡಿಕೆಶಿ ಜೊತೆ 13 ಶಾಸಕರಿಗೆ ಸಚಿವ ಸ್ಥಾನ!

Jiokannadanews Posted on 5 hours ago
1777475804134
  • ರಾಜ್ಯ

ಬೆಂಗಳೂರಿನಲ್ಲಿ ಘೋರ ದುರಂತ: ಭಾರೀ ಮಳೆಗೆ ಕಾಂಪೌಂಡ್ ಕುಸಿದು 7 ಮಂದಿ ಸಾವು!

Jiokannadanews Posted on 1 month ago
Porsche Mystery Behind ED Raids on Nalapad!
  • ರಾಜ್ಯ

ನಲಪಾಡ್ ಇಡಿ ದಾಳಿ ಹಿಂದಿದೆ ಪೋರ್ಷೆ ಕಾರಿನ ರಹಸ್ಯ!

Jiokannadanews Posted on 1 month ago

Trending News

ಸಿಎಂ ಡಿಕೆಶಿ ಜೊತೆ 13 ಶಾಸಕರಿಗೆ ಸಚಿವ ಸ್ಥಾನ! DK Shivakumar Takes Charge: 13 MLAs to Swear In as Ministers 1
  • ರಾಜ್ಯ

ಸಿಎಂ ಡಿಕೆಶಿ ಜೊತೆ 13 ಶಾಸಕರಿಗೆ ಸಚಿವ ಸ್ಥಾನ!

Posted on 5 hours ago
ಬೆಂಗಳೂರಿನಲ್ಲಿ ಘೋರ ದುರಂತ: ಭಾರೀ ಮಳೆಗೆ ಕಾಂಪೌಂಡ್ ಕುಸಿದು 7 ಮಂದಿ ಸಾವು! 1777475804134 2
  • ರಾಜ್ಯ

ಬೆಂಗಳೂರಿನಲ್ಲಿ ಘೋರ ದುರಂತ: ಭಾರೀ ಮಳೆಗೆ ಕಾಂಪೌಂಡ್ ಕುಸಿದು 7 ಮಂದಿ ಸಾವು!

Posted on 1 month ago
IPL 2026: ‘ಸೂರ್ಯವಂಶಿ’ ಎಂಬ ಸುನಾಮಿ vaibhav-sooryavanshi-3 3
  • ಕ್ರಿಕೆಟ್

IPL 2026: ‘ಸೂರ್ಯವಂಶಿ’ ಎಂಬ ಸುನಾಮಿ

Posted on 1 month ago
ನಲಪಾಡ್ ಇಡಿ ದಾಳಿ ಹಿಂದಿದೆ ಪೋರ್ಷೆ ಕಾರಿನ ರಹಸ್ಯ! Porsche Mystery Behind ED Raids on Nalapad! 4
  • ರಾಜ್ಯ

ನಲಪಾಡ್ ಇಡಿ ದಾಳಿ ಹಿಂದಿದೆ ಪೋರ್ಷೆ ಕಾರಿನ ರಹಸ್ಯ!

Posted on 1 month ago
ಕೃಷ್ಣನ ಮುಂದೆ ಚಿಕನ್ ಮಂದಿ: ಹೋಟೆಲ್ ಮಾಲೀಕ ಅರೆಸ್ಟ್ Vishu Poster Row: Restaurant Owner Jailed for Offensive Ad 5
  • ರಾಜ್ಯ

ಕೃಷ್ಣನ ಮುಂದೆ ಚಿಕನ್ ಮಂದಿ: ಹೋಟೆಲ್ ಮಾಲೀಕ ಅರೆಸ್ಟ್

Posted on 2 months ago

You may have missed

DK Shivakumar Takes Charge: 13 MLAs to Swear In as Ministers
  • ರಾಜ್ಯ

ಸಿಎಂ ಡಿಕೆಶಿ ಜೊತೆ 13 ಶಾಸಕರಿಗೆ ಸಚಿವ ಸ್ಥಾನ!

Jiokannadanews Posted on 5 hours ago
1777475804134
  • ರಾಜ್ಯ

ಬೆಂಗಳೂರಿನಲ್ಲಿ ಘೋರ ದುರಂತ: ಭಾರೀ ಮಳೆಗೆ ಕಾಂಪೌಂಡ್ ಕುಸಿದು 7 ಮಂದಿ ಸಾವು!

Jiokannadanews Posted on 1 month ago
vaibhav-sooryavanshi-3
  • ಕ್ರಿಕೆಟ್

IPL 2026: ‘ಸೂರ್ಯವಂಶಿ’ ಎಂಬ ಸುನಾಮಿ

Jiokannadanews Posted on 1 month ago
Porsche Mystery Behind ED Raids on Nalapad!
  • ರಾಜ್ಯ

ನಲಪಾಡ್ ಇಡಿ ದಾಳಿ ಹಿಂದಿದೆ ಪೋರ್ಷೆ ಕಾರಿನ ರಹಸ್ಯ!

Jiokannadanews Posted on 1 month ago

Categories

  • ಆಟೋಮೊಬೈಲ್
  • ಆರೋಗ್ಯ
  • ಉದ್ಯೋಗ
  • ಕ್ರಿಕೆಟ್
  • ಕ್ರೈಮ್
  • ಟೆಕ್
  • ದೇಶ
  • ರಾಜ್ಯ
  • ಸಿನಿಮಾ
  • Contact Us
  • About Us
  • Disclaimer
  • Terms and Conditions
  • Privacy Policy
Copyright © All rights reserved. | MoreNews by AF themes.